ಉದ್ಯೋಗ ಮಿತ್ರ ಅಭಿಯಾನ 3ನೇ ಆವೃತ್ತಿ - ಕೆಲಸ ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ

'ಸಂಸದ್ ಉದ್ಯೋಗ ಮಿತ್ರ' 3ನೇ ಆವೃತ್ತಿಯಲ್ಲಿ ಇಂದು ಫಿಡಿಲಿಟಸ್ ಕಾರ್ಪ್ ಸಂಸ್ಥೆಯ ಸಹಯೋಗದಲ್ಲಿ , 216 ಉದ್ಯೋಗಾಕಾಂಕ್ಷಿಗಳ ಸಂದರ್ಶನ ನಡೆಸಲಾಗಿದ್ದು, 6 ಕಂಪನಿಗಳು 100ಕ್ಕೂ ಅಧಿಕ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಆಗಿರುತ್ತಾರೆ. 15 ಅಭ್ಯರ್ಥಿಗಳು ಇಂದಿನ ಜಾಬ್ ಮೇಳದಲ್ಲಿಯೇ ಉದ್ಯೋಗ ಪಡೆದಿರುತ್ತಾರೆ.

ಉದ್ಯೋಗ ಮಿತ್ರ ಅಭಿಯಾನ 3ನೇ ಆವೃತ್ತಿ - ಕೆಲಸ ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ



ಡಿಸೆಂಬರ್ ತಿಂಗಳಿನಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಮೇಳ ಆಯೋಜನೆಗೊಳಿಸಲು ಯೋಜಿಸಿದ್ದು, ಇಂದಿನ ಉದ್ಯೋಗ ಮೇಳದ ಯಶಸ್ಸಿಗೆ ಸಹಕಾರ ನೀಡಿರುವ ಫಿಡಿಲಿಟಸ್ ಕಾರ್ಪ್ ಸಂಸ್ಥೆ ಹಾಗೂ ಇತರ 6 ಕಂಪನಿಗಳ ಆಡಳಿತ ಮಂಡಳಿಗೆ ಧನ್ಯವಾದಗಳು.
'ಸಂಸದ್ ಉದ್ಯೋಗ ಮಿತ್ರ' ಅಭಿಯಾನದಡಿ ಉದ್ಯೋಗ ಪಡೆಯಲು ಈ ಕೆಳಕಂಡ ಸಂಖ್ಯೆಗೆ ಮಿಸ್ ಕಾಲ್ ಕೊಡಿ 080 6191 5858.




ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಶ್ರೀ ಯಜ್ಞನಾರಾಯಣ ಕಮ್ಮಜೆ (ಸಂಸ್ಥಾಪಕರು, ಸೋನ ಗ್ರೂಪ್ ಆಫ್ ಇಂಡಸ್ಟ್ರೀಸ್), ಶ್ರೀ ಕೆ ಬಿ ಅರಸಪ್ಪ (ಅಧ್ಯಕ್ಷರು, KASSIA), ಶ್ರೀ ಆರ್ ಜಗದೀಶ್ (ಮುಖ್ಯ ಕಾರ್ಯದರ್ಶಿ ಗಳು, KASSIA), ಶ್ರೀ ಜಿ ಎಸ್ ವಿಜಯ್ ಶಂಕರ್ (ವ್ಯವಸ್ಥಾಪಕರು, ಮೈಲಾನ್ ಲ್ಯಾಬೊರೇಟರಿಸ್) ಶ್ರೀ ಅಚ್ಯುತ್ ಗೌಡ (ಸಂಸ್ಥಾಪಕರು, ಫಿಡಿಲಿಟಸ್ ಕಾರ್ಪ್) ಹಾಗೂ ಚಿತ್ರ ನಟಿ ಚಂದನ ಗೌಡ ರವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.




ಯುವ ಜನತೆಗೆ ಉದ್ಯೋಗ ಸಿಗಬೇಕು ಎಂಬ ನಿಟ್ಟಿನಲ್ಲಿ ಸಂಸದ ನೇತೃತ್ವದಲ್ಲಿ ಫಿಡಲಿಟಸ್​ ಕಾರ್ಪ್​ ಮತ್ತು ಶಿಲ್ಪಾ ಫೌಂಡೇಶನ್​ ಸಹಯೋಗದಿಂದ ಈ ಉದ್ಯೋಗ ಮೇಳ ನಡೆಸಲಾಗುತ್ತಿದೆ. ಉದ್ಯೋಗಾಕಾಂಕ್ಷಿಗಳ ಕನಸಿನ ಉದ್ಯೋಗಕ್ಕೆ ಸಹಾಯವಾಗುವಂತೆ ಜಾಬ್​ ಪೋರ್ಟಲ್​ ಅನ್ನು ಕೂಡ ಪ್ರಾರಂಭಿಸಲಾಗಿದೆ. ಇಲ್ಲಿ ಆಸಕ್ತರು ಅರ್ಜಿ ಸಲ್ಲಿಸಬಹುದು.

ಇನ್ನು ಈ ಕುರಿತು ಈ ಹಿಂದಿನ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಸಂಸದರು, ಇಂದಿನ ಕಾಲಮಾನದಲ್ಲಿ ಉದ್ಯೋಗ ಎಂಬುದು ಬಹುಮುಖ್ಯವಾಗಿದೆ. ವ್ಯಕ್ತಿ ಒಬ್ಬನ ದೃಷ್ಟಿಯಿಂದ ಅಲ್ಲದೇ ಇಡೀ ಕುಟುಂಬದ ದೃಷ್ಟಿಯಿಂದ ಉದ್ಯೋಗ ಬಹು ಅಗತ್ಯ. ಈ ಹಿನ್ನಲೆ ನೂರಾರು ಆಕಾಂಕ್ಷಿಗಳು ಕೆಲಸಕ್ಕಾಗಿ ಹುಡುಕಾಡುತ್ತಾರೆ. ಬಿಪಿಓ, ಎನ್​ಜಿಒ ಸೇರಿದಂತೆ ಹಲವು ಕಂಪನಿಗಳಿಗೆ ಉದ್ಯೋಗಕ್ಕಾಗಿ ಅಲೆಡಾಡುತ್ತಾರೆ. ಅಂತಹವರಿಗೆ ಈ ಮೂಲಕ ನೆರವಾಗುವ ಪ್ರಯತ್ನ ನಡೆಸಲಾಗಿದೆ. ಈ ಮೂಲಕ ಯುವಕರು ತಮ್ಮ ಕನಸಿನ ಉದ್ಯೋಗ ಪಡೆಯಲು ನೆರವಾಗುತ್ತಿದ್ದೇವೆ. ಈ ಹಿನ್ನಲೆಯಲ್ಲಿ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಿದ್ದೇವೆ. ಈ ಮೂಲಕ ಪ್ರತಿಭೆಗಳನ್ನು ಗುರುತಿಸಿ, ಬೆಳೆಸುವ ಪ್ರೋತ್ಸಾಹದ ಕೆಲಸ ನಮ್ಮಿಂದ ಆಗಲಿದೆ ಎಂದಿದ್ದಾರೆ.